ಎಸ್ಡಿಪಿಐ ಕಾವಳಕಟ್ಟೆ ಬ್ರಾಂಚ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಾವಲಕಟ್ಟೆ, ಆ. 16. 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾವಳ ಮೂಡೂರು ಬ್ರಾಂಚ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್‌ಡಿಪಿಐ ಕಾವಳ ಮೂಡೂರು ಬೂತ್ ಸಮಿತಿ ಅಧ್ಯಕ್ಷರುಗಳಾದ ಇಮ್ರಾನ್ ದೂಮಲಿಕೆ ಹಾಗೂ ಇರ್ಫಾನ್ ಕಾವಳಕಟ್ಟೆ ಧ್ವಜಾರೋಹಣ ಮಾಡಿದರು.

ದುಆವನ್ನು ಎ.ಎಂ.ಆದಂ ಉಸ್ತಾದ್ ಖತೀಬರು ಬಿಜೆಎಂ ದೂಮಲಿಕೆ ನಿರ್ವಹಿಸಿದರು. ಬಿಸ್ಮಿಲ್ಲಾ ಮದರಸ ದೂಮಲಿಕೆಯ ಸದರ್ ಉಸ್ತಾದ್ ಕೆ ಪಿ ಬದ್ರುದ್ದೀನ್ ಫೈಝಿ ಸಂದೇಶ ಭಾಷಣ ಮಾಡಿದರು. ಎಸ್ಡಿಪಿಐ ಸರಪಾಡಿ ಬ್ಲಾಕ್ ಉಪಾಧ್ಯಕ್ಷರಾದ ಉಸ್ಮಾನ್ ಅಲಂಗಾಲು ಪ್ರಸ್ತಾವಿಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸಫಾ ಸಲ್ಮಾ ಕಾವಲ್ ಕಟ್ಟೆ ದೂಮಲಿಕೆ ಮಸೀದಿ ಅಧ್ಯಕ್ಷರಾದ ಹುಸೈನಾರ್, ರಝಾಕ್ ಉಸ್ತಾದ್, ಸಾಧಿಕ್ ದೂಮಲಿಕೆ ಹಾಗೂ ಕಾವಳಕಟ್ಟೆ ಬ್ರಾಂಚ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಎಸ್ಡಿಪಿಐ ಕಾವಳ ಮೂಡೂರು ಬೂತ್ ಸಮಿತಿ ಕಾರ್ಯದರ್ಶಿ ಸಾದಿಕ್ ದೂಮಲಿಕೆ ನಿರೂಪಿಸಿದರು.

Scroll to Top