ದಕ್ಷಿಣ ಕನ್ನಡದ 6 ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ದಕ್ಷಿಣ ಕನ್ನಡದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಬಜ್ಪೆ ಇನ್‌ಸ್ಪೆಕ್ಟರ್ ನಿರಂಜನ್ ಕುಮಾರ್ ಸಕಲೇಶಪುರ ಗ್ರಾಮಾಂತರ ವೃತ್ತಕ್ಕೆ , ಐಎಸ್‌ಡಿಯಲ್ಲಿದ್ದ ಸಂದೇಶ್ ಮೂಡುಬಿದಿರೆ ಠಾಣೆಗೆ, ಡಿಸಿಆ‌ರ್‌ಇ ನಲ್ಲಿದ್ದ ಅಜ್ಮತ್ ಅಲಿಗೆ ಬಜ್ಪೆ ಠಾಣೆಗೆ, ಸಿಟಿ ಎಸ್‌ಬಿಯಲ್ಲಿದ್ದ ಮುಹಮ್ಮದ್ ಶರೀಫ್‌ ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಕದ್ರಿ ಠಾಣೆಗೆ ಹಾಗೂ ಕದ್ರಿಯ ಅನಂತ ಪದ್ಮನಾಭರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.

Also Read  ಎಳನೀರು ಕಳ್ಳತನ - ವಾಹನದ ನಂಬರ್ ಪ್ಲೇಟ್ ಗೆ ಮಸಿ ಬಳಿದು ಕೃತ್ಯವೆಸಗಿದ ಕಿಡಿಗೇಡಿಗಳು

error: Content is protected !!
Scroll to Top