ರಾಜ್ಯಕ್ಕೆ ಮತ್ತೆ ‘ಮೋದಿ’ ಆಗಮನ        ➤ ಏಪ್ರಿಲ್ 9 ರಂದು ‘ಬಂಡೀಪುರ’ಕ್ಕೆ ಪ್ರಧಾನಿ ಭೇಟಿ 

(ನ್ಯೂಸ್ ಕಡಬ)Newskadaba.com ಗುಂಡ್ಲುಪೇಟೆ,ಮಾ.31 ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಈಗಾಗಲೇ ಹಲವು ಬಾರಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.ಇದೀಗ ಏಪ್ರಿಲ್ 9 ರಂದು ಮತ್ತೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಹುಲಿ ಯೋಜನೆ 50 ವರ್ಷ ಪೂರೈಸಿದ ಹಿನ್ನೆಲೆ ಮೈಸೂರಿನಲ್ಲಿ ಏ.9 ರಂದು ನಡೆಯಲಿರುವ ಮೆಗಾ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.ಬಂಡೀಪುರಕ್ಕೆ ಆಗಮಿಸುವ ಮೋದಿ ‘ವಿದ್ಯುತ್ ಸ್ಪರ್ಶಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ರಕ್ಷಿಸಿದ್ದವರನ್ನು ಅಭಿನಂದಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಈಗಾಗಲೇ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

 

 

Scroll to Top