ಬಾಣಂತಿ ಕೊಲೆ ಪ್ರಕರಣ ➤ತಾಯಿ, ತಮ್ಮ ಅರೆಸ್ಟ್!

(ನ್ಯೂಸ್ ಕಡಬ) newskadaba.com. ಕೊಪ್ಪಳ, ಮಾ. 27. ಬಾಣಂತಿಯ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಮೃತ ಮಹಿಳೆಯ ತಾಯಿ ಹಾಗೂ ತಮ್ಮನನ್ನೇ ಪೊಲೀಸರು ಬಂಧನ ಮಾಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರಿಗೆ ಶಾಕ್ ಆಗಿದ್ದು, ಬಾಣಂತಿ ಅಂತಲೂ ನೋಡದೆ ಹೆತ್ತ ತಾಯಿಯೇ ಮಗಳನ್ನು ಕೊಲೆಗೈದು ಸುಟ್ಟು ಹಾಕಲು ಕಾರಣವೇನು ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತ ಮಹಿಳೆ ನೇತ್ರಾವತಿ ಹಾಗೂ ಆರೋಪಿಗಳ ಇಬ್ಬರ ನಡುವೆ ಹಣ ಹಾಗೂ ಬಂಗಾರದ ವಿಚಾರದಲ್ಲಿ ಆರಂಭವಾದ ಜಗಳವೇ ಕೊಲೆಗೆ ಕಾರಣವಾಗಿದೆ.

ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಈ ಕೊಲೆ ಸುಟ್ಟು ಹಾಕಿದ್ದರು. ಯುಗಾದಿ ಅಮಾವಾಸ್ಯೆಯಂದೆ ಕೃತ್ಯ ನಡೆದಿದ್ದ ಕಾರಣ ನಿಧಿಗಾಗಿಯೇ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು.

Scroll to Top