ಕೋಮುವಾದವನ್ನು ಬೆಂಬಲಿಸುತ್ತಾರೆಂಬ ಆರೋಪ ► ಪಬ್ಲಿಕ್ ಟಿವಿಯವರನ್ನು ತರಾಟೆಗೆತ್ತಿಕೊಂಡ ಮುಸ್ಲಿಮರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ಕೋಮುವಾದಿ ವರದಿಗಳನ್ನು ಬೆಂಬಲಿಸಿ ಪ್ರಕಟಿಸುತ್ತಾರೆ ಎಂದು ಆರೋಪಿಸಿ ಪಬ್ಲಿಕ್ ಟಿವಿಯ ಪ್ರತಿನಿಧಿಗಳನ್ನು ಮುಸ್ಲಿಮರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರದಂದು ಮಂಗಳೂರಿನಲ್ಲಿ ನಡೆದಿದೆ.

ದೀಪಕ್‌ ರಾವ್ ಹತ್ಯೆಯಂದು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಭಾನುವಾರದಂದು ಮೃತಪಟ್ಟ ಆಕಾಶ ಭವನ ನಿವಾಸಿ ಅಹಮದ್ ಬಶೀರ್ ರವರ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ಸ್ಥಳಕ್ಕೆ ವರದಿ ಮಾಡಲೆಂದು ತೆರಳಿದ್ದ ಪಬ್ಲಿಕ್ ಟಿವಿಯ ಪ್ರತಿನಿಧಿಗಳಿಗೆ ಘೇರಾವ್ ಹಾಕಿದ ಸಾರ್ವಜನಿಕರು ಸ್ಥಳದಿಂದ ಕಳುಹಿಸಿದ್ದು ಇದೀಗ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

error: Content is protected !!

Join the Group

Join WhatsApp Group