ಕೊಳ್ಳೇಗಾಲದ ನಾಯ್ಡು ಗಾರ್ಡನ್ ನಲ್ಲಿ ಉಚಿತ ಮೂಳೆ ತಪಾಸಣೆ ಶಿಬಿರ  

(ನ್ಯೂಸ್ ಕಡಬ)newskadaba.com ಕೊಳ್ಳೆಗಾಲ, ಫೆ.18. ಪಟ್ಟಣದ ನಾಯ್ಡು ಗಾರ್ಡನ್‌ ಬಡಾವಣೆಯಲ್ಲಿ ಪಿ.ಕೆ  ವೇಣುಗೋಪಾಲ್‌ ನಾಯ್ಡು ಮತ್ತು ರಾಜಮ್ಮ ನಾಯ್ಡು ಸ್ಮರಣಾರ್ಥ ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

ಮಾಜಿ ಶಾಸಕ ಎಸ್. ಜಯಣ್ಣ ಅವರು ಈ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಸುಧಾರಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೇಳಿದರು.

 

Scroll to Top