ಕಾರ್ಕಳ: ಚಿನ್ನ ಪಡೆದು ಗ್ರಾಹಕರಿಗೆ ವಂಚನೆ  ➤  ಜುವೆಲ್ಲರ್ಸ್ ಮಾಲಕನಿಗೆ ಶಿಕ್ಷೆ.!

(ನ್ಯೂಸ್ ಕಡಬ)newskadaba.com ಕಾರ್ಕಳ, ಫೆ,15. ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಾ ಗ್ರಾಹಕರಿಗೆ ವಂಚನೆಗೈದ ಆರೋಪಿ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಎಂಬಾತನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಲೀಲಾವತಿ ಪೂಜಾರ್ತಿ ಇವರಿಂದ 27.500 ಗ್ರಾಂ ತೂಕದ ರೂ. 50,000 ಮೌಲ್ಯದ ಹಳೆಯ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಇದರಿಂದ ಹೊಸ ತಾಗಿ ಚಿನ್ನದ ಎರಡಿ ಎಳೆ ನೇಯ್ಗಿ ಪೀಸ್ ಗುಂಡು ಕರಿಮಣಿ ಸರವನ್ನು ಮಾಡಿಕೊಡುವುದಾಗಿ ಆರೋಪಿ ನಂಬಿಸಿದ್ದನು.

 

error: Content is protected !!

Join the Group

Join WhatsApp Group