ಜೀಪು – ಸ್ಕೂಟರ್ ಢಿಕ್ಕಿ ➤ಸ್ಕೂಟರ್ ಸವಾರಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.13.ಜೀಪು ಮತ್ತು ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ  ಘಟನೆ  ಇಂದು  ಅಪರಾಹ್ನ ಕುಂಬ್ರ ಜಂಕ್ಷನ್ ನಲ್ಲಿ ನಡೆದಿದೆ.  ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಜೀಪು ಹಾಗೂ ಕೌಡಿಚ್ಚಾರ್ ನಿಂದ ಕುಂಬ್ರಕ್ಕೆ ಬರುತ್ತಿದ್ದ  ಸ್ಕೂಟರ್ ನಡುವೆ ಕುಂಬ್ರ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ.ಪರಿಣಾಮ ಸ್ಕೂಟರ್ ಸವಾರನಿಗೆ ಸ್ವಲ್ಪ ಗಾಯಗಳಾಗಿವೆ.

ಢಿಕ್ಕಿಯನ್ನು ತಪ್ಪಿಸುವ ಭರದಲ್ಲಿ ಜೀಪು ಚಾಲಕ ತನ್ನ ವಾಹನವನ್ನು ರಸ್ತೆ ಬದಿಗೆ ಇಳಿಸಿದ್ದು ಈ ವೇಳೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಜೀಪು ತಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Scroll to Top