ಡಾ.ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ” ಕ್ರಾಂತಿ ಸೂರ್ಯ ಮಹಾನಾಟಕದ ” ಭಿತ್ತಿ ಪತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೀದರ್, ಫೆ.11.  ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧ್ದ ಬೆಳಕು ಟ್ರಸ್ಟ್ ಹಾಗೂ ಕ್ರಾಂತಿ ಸೂರ್ಯ ಮಹಾನಾಟಕ ಪ್ರದರ್ಶನ ಸ್ವಾಗತ ಸಮಿತಿ ವತಿಯಿಂದ ದಿನಾಂಕ 19-2-2023 ರಂದು ನೆಹರು ಸ್ಟೇಡಿಯಂ ನಲ್ಲಿ ನಡೆಯಲಿರುವ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನಾಧಾರಿತ ಐತಿಹಾಸಿಕ ಕ್ರಾಂತಿ ಸೂರ್ಯ ಮಹಾನಾಟಕ ಪ್ರಯುಕ್ತ ಭೀತಿ ಪತ್ರ ಬಿಡುಗಡೆ ಸಮಾರಂಭ ಜರುಗಿತು ಎಂದು ವರದಿಯಾಗಿದೆ.


ಪೂಜ್ಯ ಭಂತೆ ಜ್ಞಾನ ಸಾಗರ ರವರು ಸಾನಿಧ್ಯ ವಹಿಸಿದರು ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ನಾಟಕ ಪ್ರದರ್ಶನ ಸ್ವಾಗತ ಸಮಿತಿಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ನಾಟಕದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮಾರುತಿ ಬೌಧ್ದೆ ರವರು ಜಂಟಿಯಾಗಿ ಬಿಡುಗಡೆ ಮಾಡಿದರು.

Also Read  ಕಡಬ: ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ

 

error: Content is protected !!
Scroll to Top