(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 23.  ಗದಗ ಟ್ಯಾಂಕರ್ ವಾಹನ ಹಾಗೂ ಕೆಂಟರ್ ನಡುವೆ  ಅಪಘಾತ ಸಂಭವಿಸಿದೆ. ಈ ರಭಸಕ್ಕೆ ಟ್ಯಾಂಕರ್ ಸಂಪೂರ್ಣ ಜಖಂಗೊಂಡಿರುವ ಘಟನೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿಯಲ್ಲಿ ನಡೆದಿದೆ.

ಅಪಘಾತದ ರಭಸಕ್ಕೆ ಟ್ಯಾಂಕರ್ ಚಾಲಕನ 2 ಕಾಲು ಕಟ್ ಆಗಿದ್ದು, ವಾಹನ  ಒಳಕ್ಕೆ ಸಿಲುಕಿಕೊಂಡು ಚಾಲಕ ನರಳಾಡಿದ್ದಾನೆ.ಪೊಲೀಸರು ಹಾಗೂ ಸ್ಥಳೀಯರಿಂದ ಸಿಲುಕಿಕೊಂಡ ಚಾಲಕನ ರಕ್ಷಣೆ ಮಾಡಲಾಗಿದೆ. ಚಾಲಕನನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಟರ್ ವಾಹನ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಅತಿಯಾದ ವೇಗದ ಚಾಲನೆ  ಈ ಘಟನೆ ನಡೆಯಲು ಕಾರಣ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group