(ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 18. ಗಾಳಿಪಟ ಬಿಡಲು ಹೋಗಿದ್ದ 11 ವರ್ಷದ ಬಾಲಕ ಅಬೂಬಕ್ಕರ್ ಮೃತಪಟ್ಟ ಘಟನೆ ಆರ್ ಟಿ ನಗರದ ಚಾಮುಂಡಿ ನಗರ ಫ್ಯಾಕ್ಟರಿಯೊಂದರ ಬಳಿ ನಡೆದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಅಬೂಬಕ್ಕರ್ ಎಂಬ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಅಬೂಬಕ್ಕರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.














