ಕುಣಿಗಲ್ ಪೊಲೀಸರ ಜತೆ ಅನುಚಿತ ವರ್ತನೆ ➤ಇಬ್ಬರು ಆರೋಪಿಗಳ ಬಂಧನ!

ನ್ಯೂಸ್ ಕಡಬ) newskadaba.com, ಬೆಂಗಳೂರು,ಜ. 18 ಕುಣಿಗಲ್ ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರ ಜತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ನಲ್ಲಿ ನಡೆದಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಕಂದಾಯ ಇಲಾಖೆ ಸಿಬ್ಬಂದಿ ವೆಂಕಟೇಶ್ ಮತ್ತು ರಾಮಚಂದ್ರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಬಂಧಿತ ಆರೋಪಿಗಳು.

ರಾತ್ರಿ ವೇಳೆ ಕಾನ್ ಸ್ಟೆಬಲ್ ಗಳಾದ ಮಿಥುನ್ ಮತ್ತು ಸುಮನ್ ಹೌಸಿಂಗ ಬೋರ್ಡ್ ಕಾಲೋನಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಆರೋಪಿಗಳು ಅವರೊಟ್ಟಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಇಬ್ಬರ ಉಪಟಳದಿಂದ ಬೇಸತ್ತ ಪೊಲೀಸರು 112 ತರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ತರ್ತು ವಾಹನದ ಸಿಬ್ಬಂದಿ ಮತ್ತು ಸಿಪಿಐ ಗುರುಪ್ರಸಾದ್ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಕಡಬ: ನಾಪತ್ತೆಯಾಗಿದ್ದ ಹತ್ತನೇ ತರಗತಿ ಬಾಲಕಿ ಪತ್ತೆ

 

error: Content is protected !!
Scroll to Top