ಜಿಂಕೆ ಬೇಟೆ  ➤ ರೈತರನ್ನು ಕಂಡು ಪರಾರಿಯಾದ ಖದೀಮರು..!!!

Crime


(ನ್ಯೂಸ್ ಕಡಬ) newskadaba.com  ನಂಜನಗೂಡು, ಡಿ.18  ಅಪರಿಚಿತರ ಗುಂಪೊಂದು ಎತ್ತಿನ ಮುಂಟಿ ಎಂಬುವ ಸ್ಥಳದಲ್ಲಿ ಜಿಂಕೆಯೊಂದನ್ನು ಬೇಟೆಯಾಡಿ, ಕೊಂದು, ಮರವೊಂದಕ್ಕೆ ಜಿಂಕೆಯನ್ನು ನೇತು ಹಾಕಿ, ಮಾಂಸ ಕತ್ತರಿಸಿ ತುಂಬುತ್ತಿದ್ದ ಸಂಧರ್ಭದಲ್ಲಿ, ಪಕ್ಕದಲ್ಲಿದ್ದ ರೈತರನ್ನು ಕಂಡು, ಗಾಬರಿಗೊಂಡು, ಕದಿಮರು ಜಿಂಕೆ ಮಾಂಸ ಸ್ಥಳದಲ್ಲೇ ಬಿಟ್ಟು, ಜೀಪ್ ನಲ್ಲಿ ತೆರಳುತ್ತಿದ್ದಾಗ ಪಲ್ಟಿ ಯಾಗಿ ಬಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.





ಸ್ಥಳಕ್ಕೆ ಕವಲಂದೆ ಪೊಲೀಸ್ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.






 

error: Content is protected !!
Scroll to Top