ಆಲಂಕಾರು: ಸಿಡಿಲು ಬಡಿದು ದನ ಮೃತ್ಯು

(ನ್ಯೂಸ್ ಕಡಬ) newskadaba.com ಆಲಂಕಾರು, ಸೆ. 01. ಆಲಂಕಾರು ಗ್ರಾಮದ ಕೇಪುಳು ಜನಾರ್ಧನ ಪೂಜಾರಿಯವರ ಹಟ್ಟಿಗೆ ಆ. 31 ರಂದು ಸಂಜೆ ಸಿಡಿಲು ಬಡಿದ ಪರಿಣಾಮ ದನವೊಂದು ಮೃತಪಟ್ಟ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ, ಗ್ರಾಮ ಸಹಾಯಕರಾದ ವಿಶ್ವನಾಥ ಹಾಗು ಪಶುಸಂಗೋಪನೆ ಇಲಾಖೆಯ ವೈದ್ಯರಾದ ಡಾ|ಅಜಿತ್, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಗಣೇಶ್ ರೈ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಉಳ್ಳಾಲ: ಎಸ್ಡಿಪಿಐ ಮುಖಂಡನಿಂದ ಮಹಿಳೆಗೆ ಲೈಂಗಿಕ ಕಿರುಕುಳ..! ➤ ಪ್ರಕರಣ ದಾಖಲು

error: Content is protected !!
Scroll to Top