ಸುಳ್ಯ: ಕರೆಂಟ್ ಶಾಕ್ ತಗುಲಿ ವ್ಯಕ್ತಿ ಮೃತ್ಯು..!!!

(ನ್ಯೂಸ್ ಕಡಬ) newskadaba.com ಸುಳ್ಯ, ಜು. 28. ಕೃಷಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವರು ತೋಟಕ್ಕೆ ನೀರು ಹಾಯಿಸುತ್ತಿದ್ದ ವೇಳೆ ಕರೆಂಟ್ ಶಾಕ್ ತಗುಲಿ ಮೃತಪಟ್ಟ ಘಟನೆ ಅಜ್ಜಾವರ ಗ್ರಾಮದ ಮೂಳ್ಯ ಅಟ್ಲೂರಿನಲ್ಲಿ ನಡೆದಿದೆ.


ಮೃತಪಟ್ಟವರನ್ನು ಮುಳ್ಯ ಅಟ್ಲೂರು ನಿವಾಸಿ ಶಿವಪ್ಪ ಮೂಲ್ಯ ಎಂದು ಗುರುತಿಸಲಾಗಿದೆ. ಇವರು ರವಿಪ್ರಕಾಶ ಎಂಬವರ ತೋಟಕ್ಕೆ ಕೃಷಿ ಕೆಲಸಕ್ಕೆಂದು ಬಂದಿದ್ದು, ಪಂಪ್ ಹೌಸ್ ನಿಂದ ನೀರು ಬಿಡುವ ವೇಳೆ ಕರೆಂಟ್ ಶಾಕ್ ತಗುಲಿ ಅವರು ಎಸೆಯಲ್ಪಟ್ಟರು. ತಕ್ಷಣವೇ ಅಲ್ಲೇ ಇದ್ದ ರವಿಪ್ರಕಾಶ್ ಹಾಗೂ ಇತರ ಕೆಲಸದವರು ಅವರನ್ನು ಜೀಪಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದರೂ ಅದಾಗಲೇ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group