ಪರಿಸರದ ದಿನಾಚರಣೆ ಪ್ರಯುಕ್ತ ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ವತಿಯಿಂದ ಉಚಿತ ಸಸಿ ವಿತರಣೆ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಜೂ. 05. ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ
“ಉಸಿರಿಗಾಗಿ ಹಸಿರು” ಎಂಬ ಧ್ಯೇಯ ವಾಕ್ಯದೊಂದಿಗೆ
ಒಂದು ನೂರಕ್ಕೂ ಮಿಕ್ಕ ವಿವಿಧ ಬಗೆಯ ಸಸಿಗಳನ್ನು ತೆಕ್ಕಾರು ವ್ಯಾಪ್ತಿಯ ಕಾರ್ಯಕರ್ತರ ವಿವಿಧ ಮನೆಗಳಿಗೆ ಇಂದು ಉಚಿತವಾಗಿ ವಿತರಿಸಲಾಯಿತು.

ವರ್ಷಂಪ್ರತಿ ಎಸ್ಸೆಸ್ಸೆಫ್ ತೆಕ್ಕಾರು ಯುನಿಟ್ ಇಂತಹ ಸೇವೆಗಳನ್ನು ಮಾಡುತ್ತಿದ್ದು, ತೆಕ್ಕಾರ್ ನ್ನು ಹಚ್ಚ ಹಸಿರಿನ ನಾಡಾಗಿ ಪರಿವರ್ತಿಸುವ ಪಣ ತೊಟ್ಟಿದೆ. ಸ್ವತಃ ಸಂಘಟನಾ ಕಾರ್ಯಕರ್ತರೇ ಮನೆ ಮನೆ ತೆರಳಿ ಗಿಡಗಳನ್ನು ಸ್ವತಃ ಕಾರ್ಯಕರ್ತರೆ ನೆಡುವ ಮೂಲಕ ಪರಿಸರ ದಿನದ ಮಹತ್ವ ಸಾರಿದರು. ಈ ಸಂದರ್ಭದಲ್ಲಿ ಸಂಘಟನಾ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group