ಸುಬ್ರಹ್ಮಣ್ಯ: ಹಠಾತ್ತನೆ ಕಳಚಿ ಕಾರಿಗೆ ಅಪ್ಪಳಿಸಿದ ಚಲಿಸುತ್ತಿದ್ದ ಜೀಪಿನ ಚಕ್ರ ➤ ಕಾರಿನಲ್ಲಿದ್ದವರು ಪವಾಡ ಸದೃಶ ಪಾರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.14. ಚಲಿಸುತ್ತಿದ್ದ ಜೀಪಿನ ಮುಂಭಾಗದ ಚಕ್ರ ಕಳಚಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾದ ಘಟನೆ ಸುಬ್ರಹ್ಮಣ್ಯದ ಏನೆಕಲ್ಲಿನಲ್ಲಿ ಶುಕ್ರವಾರದಂದು ನಡೆದಿದೆ.

ಏನೆಕಲ್ಲು ಗ್ರಾಮದ ಬಾನಡ್ಕ ನಿವಾಸಿ ಉದಯಕುಮಾರ್ ಎಂಬವರು ಚಲಾಯಿಸುತ್ತಿದ್ದ ಜೀಪು ಏನೆಕಲ್ಲು ಸಮೀಪದ ಬಾಲಾಡಿ ಎಂಬಲ್ಲಿ ತಲುಪಿದಾಗ ಜೀಪಿನ ಮುಂಭಾಗದ ಚಕ್ರವು ಕಳಚಿ ಎದುರಿನಿಂದ ಬರುತ್ತಿದ್ದ ಹೋಂಡಾ ಕಾರಿಗೆ ಅಪ್ಪಳಿಸಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಗಳಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Also Read  ಕರಾವಳಿಯಲ್ಲಿ ಮತ್ತೆ ತಲವಾರು ದಾಳಿ ➤ ಯುವಕನಿಗೆ ಮಾರಣಾಂತಿಕ ಹಲ್ಲೆ- ಪರಿಚಯಸ್ಥರಿಂದಲೇ ಕೃತ್ಯ...!

 

 

 

error: Content is protected !!