ನೂಜಿಬೈಲ್ ದೈವಸ್ಥಾನಕ್ಕೆ ಸಚಿವ ಎಸ್.ಅಂಗಾರ ಬೇಟಿ



(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ. 27. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ರವಿವಾರ ರಾತ್ರಿ ಬೇಟಿ ನೀಡಿದರು.







ಪ್ರಥಮ ಬಾರಿಗೆ ಬೇಟಿ ನೀಡಿದ ಸಚಿವರನ್ನು ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬೇಟಿ ನೀಡಿದ ಸಚಿವರು ಹರಕೆಯ ರಂಗಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ವೈಧಿಕ ವಿಧಾನ ನೆರವೇರಿಸಿ,  ಸಚಿವರನ್ನು  ಹಾರೈಸಿದರು. ಅರ್ಚಕ ಕೃಷ್ಣ ಹೆಬ್ಬಾರ್ ಸಹಕರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಮೃತ್ಯುಂಜ ಬೀಡೆ ಕೆರೆತೋಟ, ಆಡಳಿತ, ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂಜಿಬಾಳ್ತಿಲ ರೆಂಜಿಲಾಡಿಗೆ ಸಚಿವರಾಗಿ ಪ್ರಥಮವಾಗಿ ಬೇಟಿ ನೀಡಿದ ಸಚಿವ ಎಸ್.ಅಂಗಾರ ಅವರನ್ನು ದೈವಸ್ಥಾನದ ವತಿಯಿಂದ ಹಾಗೂ ವಿವಿಧ ಸಂಘಸಂಸ್ಥೆ, ಸಾರ್ವಜನಿಕರು ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿ ಸಮ್ಮಾನಿಸಿದರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಪ್ರಕಾಶ್ ಎನ್.ಕೆ., ರಾಕೇಶ್ ರೈ ಕೆಡೆಂಜಿ, ಪುಲಸ್ತ್ಯಾ ರೈ, ಎ.ಬಿ.ಮನೋಹರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಶೆಟ್ಟಿ ಸಾಯಿರಾಮ್ ಸ್ವಾಗತಿಸಿ, ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.






error: Content is protected !!
Scroll to Top