ಶಾಸಕ ಅಂಗಾರರಿಗೆ ಸಚಿವ ಸ್ಥಾನ ನೀಡಬೇಕೆಂದು ಸುಳ್ಯದ ಮಹಿಳೆಯಿಂದ ಪ್ರಧಾನಿಗೆ ಪತ್ರ..!

(ನ್ಯೂಸ್ ಕಡಬ) newskadaba.com  ಸುಳ್ಯ, ಜ.14. ನೂತನ ಸಚಿವ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ ಲಭಿಸಿರುವ ಬಗ್ಗೆ ಶ್ಲಾಘಿಸಿದ ಮಹಿಳೆಯೋರ್ವರು ಎಸ್‌ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಕೊಡಿಯಾಲ ನಿವಾಸಿ ಕುಂಟುಪುಣಿ ಹಾಲು ಉತ್ಪಾದಕ ಸೊಸೈಟಿಯ ನಿರ್ದೇಶಕಿ ನೀರಜಾಕ್ಷಿ ಎಂಬವರು ಪ್ರಧಾನಿಗೆ ಪತ್ರ ಬರೆದಿದ್ದು, ಅಂಗಾರರು ಶಾಸಕರಾದ ಬಳಿಕ ಗ್ರಾಮಾಂತರ ಪ್ರದೇಶಗಳಿಗೆ ಮೂಲ ಸೌಕರ್ಯಗಳು ತಲುಪುವಂತಾಗಿದೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Also Read  ರಸ್ತೆ ದಾಟುವ ವೇಳೆ ಆಟೋ ರಿಕ್ಷಾ ಢಿಕ್ಕಿ- ಪಾದಚಾರಿಗೆ ಗಾಯ

error: Content is protected !!
Scroll to Top