ಸುಬ್ರಹ್ಮಣ್ಯ: ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 13. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಹಾಗೂ ಇದರ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯದ ನಗರ ಅಧ್ಯಕ್ಷರಾದ ಸೋಮಶೇಖರ್ ನಾಯಕ್, ಉಪನ್ಯಾಸಕರು ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ವಹಿಸಿದ್ದರು ಹಾಗೂ ಮುಖ್ಯ ಅತಿಥಿಯಾಗಿ ವನಜ.ವಿ ಭಟ್ ಸದಸ್ಯರು ಅಭಿವೃದ್ಧಿ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ಉಪಸ್ಥಿತರಿದ್ದರು ಮತ್ತು ಸ್ಪರ್ಧೆಯಲ್ಲಿ ಬಹುಮಾನವನ್ನು ಪ್ರಬಂಧ : ಪ್ರಥಮ ಅನುಷಾ, ದ್ವಿತೀಯ ಸೌಮ್ಯ ಸಿ.ಡಿ, ಕವನ ರಚನೆ : ಪ್ರಥಮ ಶ್ರಾವ್ಯ ಸಿ ಆಳ್ವಾ ,ದ್ವಿತೀಯ ಜಯಶ್ರೀ, ಚಿತ್ರಕಲೆ : ಪ್ರಥಮ ಅನಂತ, ದ್ವಿತೀಯ ಯಶ್ವಿನಿ ಇವರು ಪಡೆದುಕೊಂಡರು.

error: Content is protected !!

Join the Group

Join WhatsApp Group