ಮಂಗಳೂರು :23 ಕೆ.ಜಿ ಗಾಂಜಾ ಸಾಗಾಟ ➤ಆರೋಪಿ ಖಾಕಿ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು . 03: ಮಂಗಳೂರು ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟದ ಜಾಲ ಪತ್ತೆಯಾಗುತ್ತಲೇಯಿದೆ. ಅದರಂತೆ ಮಂಜನಾಡಿ ಗ್ರಾಮದ ವಿಜಯನಗರದದಲ್ಲಿ ಸುಮಾರು 23 ಕೆಜಿ ಗಾಂಜಾವನ್ನು ಪತ್ತೆಹಚ್ಚಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಓರ್ವ ಆರೋಪಿಯನ್ನು ಬಂದಿಸಿದ್ದಾರೆ.

ಬಂಧಿತನನ್ನು ಮಂಗಳೂರಿನ ತೌಡುಗೋಳಿಯ ಅಬ್ದುಲ್ ಖಾದರ್ ತನ್ಸಿ(23) ಎಂದು ಗುರುತಿಸಲಾಗಿದೆ. ಆರೋಪಿ ಮಂಜನಾಡಿಯ ವಿಜಯನಗರದಿಂದ ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪೊಲೀಸರು 23 ಕೆ,ಜಿ 480 ಗ್ರಾಂ ತೂಕದ ಗಾಂಜಾ, ಬೈಕ್ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!

Join the Group

Join WhatsApp Group