ಉಪ್ಪಿನಂಗಡಿ ಬಳಿ ರಸ್ತೆ ಅಪಘಾತ, ದ್ವಿಚಕ್ರ ಸವಾರ ಮೃತ್ಯು ➤ ಸಾವಿನ ಮುನ್ಸೂಚನೆ ನೀಡಿತ್ತಾ ವಾಟ್ಸಪ್ ಸ್ಟೇಟಸ್.!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 02. ಉಪ್ಪಿನಂಗಡಿ ಬಳಿಯ ಎಚ್ ಎಂ ಆಡಿಟೋರಿಯಂ ಬಳಿಯಲ್ಲಿ ಗುರುವಾರ ರಾತ್ರಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಬಾರ್ಯ ಗ್ರಾಮದ ಬೇಂಗಿಲ ತುಂಬೆತ್ತಡ್ಕ ನಿವಾಸಿ ಅಬೂಬಕ್ಕರ್ ಎಂಬುವರ ಪುತ್ರ ಮಹ್ಮಮದ್ ಆರಿಫ್ (23) ಎಂದು ಗುರುತಿಸಲಾಗಿದೆ.

ಮಹ್ಮಮದ್ ಆರಿಫ್ ರವರು ಉಪ್ಪಿನಂಗಡಿ ಕಡೆಯಿಂದ ಕರಾಯ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ . ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಈತನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರಾವಾಗಿ ಗಾಯಗೊಂಡು ಆರಿಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Also Read  ಸುಳ್ಯ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೀಣಾ ಎಂ.ಟಿ. ನಿಯೋಜನೆ   

 

ಅಚ್ಚರಿ ವಿಚಾರವೆಂದರೇ, ಈ ದುರ್ಘಟನೆ ಸಂಭವಿಸುವ ಹಿಂದಿನ ದಿನ ಈತ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ” ಒಂದೊಂದು ಮರಣ ವಾರ್ತೆಯೂ ನಮ್ಮ ಮರಣವನ್ನು ನೆನಪಿಸುವ ಎಚ್ಚರಿಕೆ ಘಂಟೆಯಾಗಿರುತ್ತದೆ. ಇರುವಷ್ಟು ದಿನ ಯಾರನ್ನು ಕೆಟ್ಟವರೆಂದು ದ್ವೇಷಿಸದೆ ಎಲ್ಲರ ಜೊತೆ ಪರಸ್ಪರ ಪ್ರೀತಿಸಿ” ಎಂದು ಬರೆದುಕೊಂಡಿದ್ದಾನೆ. ಇದು ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು.

 

 

error: Content is protected !!
Scroll to Top