ಮೀನುಗಾರ ಕುಟುಂಬಗಳಿಗೆ ಮನೆ ನಿರ್ಮಾಣ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ.19:  ಪ್ರತಿ ಗ್ರಾಮದಲ್ಲೂ 20 ಮೀನುಗಾರ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುವುದು. ಜಪಾನ್ ಮಾದರಿಯಲ್ಲಿ ಕರಾವಳಿ ತೀರ ಅಭಿವೃದ್ಧಿಪಡಿಸಲಾಗುವುದು ಎಂದು ಹಿಂದು ಧಾರ್ಮಿಕ ದತ್ತಿ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 

ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ರಾಜೀವ ಗಾಂಧಿ ವಸತಿ ಯೋಜನೆ ಮೂಲಕ ಮೀನುಗಾರರಿಗೂ ಮನೆ ನಿರ್ಮಿಸಿಕೊಡಲಾಗುತ್ತಿತ್ತು. ಪ್ರಸ್ತುತ ಮೀನುಗಾರಿಕಾ ಇಲಾಖೆಯಿಂದಲೇ ವಸತಿ ಯೋಜನೆ ಕಲ್ಪಿಸಲಾಗುತ್ತಿದೆ ಎಂದರು.ಕೇಂದ್ರ ಜಿಎಸ್‌ಟಿ ಹಣ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಹಣ ಬಿಡುಗಡೆ ಮಾಡುವುದರಲ್ಲಿ ಹಿಂದೆ ಮುಂದೆ ಆಗಿರಬಹುದು. ಆದರೆ ಮೋದಿ ಸರ್ಕಾರದ ಬಂದ ನಂತರ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನ ದುಪ್ಪಟ್ಟಾಗಿದೆ. ಜಿಎಸ್‌ಟಿ ಸಹಿತ ಎಲ್ಲ ಅನುದಾನ ಕೇಂದ್ರ ಕೊಡುತ್ತದೆ ಎಂಬ ಆಶಾಭಾವವಿದೆ ಎಂದು ತಿಳಿಸಿದರು.

Also Read  ಕಾಣಿಯೂರು ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಾ.30ರೊಳಗೆ ಕಾಂಕ್ರೀಟಿಕರಣಕ್ಕೆ ಭರವಸೆ ► ಎ.2ರ ಪ್ರತಿಭಟನೆ ಮುಂದೂಡಿಕೆ

 

error: Content is protected !!
Scroll to Top