ಪಂಜದಲ್ಲಿ ನೂತನ ಅಂಗಡಿ ಮಾಲಕರಿಂದ ಅಂಬುಲೆನ್ಸ್ ಗೆ ದೇಣಿಗೆ

(ನ್ಯೂಸ್ ಕಡಬ) newskadaba.com ಸುಳ್ಯ. ,23: ಪಂಜದ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ಆ.22 ರಂದು ಶುಭಾರಂಭಗೊಂಡ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಫ್ಯಾಷನ್, ಪರಿವಾರ್ ಸ್ವೀಟ್ ಕಾರ್ನರ್ ಇದರ ಮಾಲಕರು ಪಂಚಶ್ರೀ ಪಂಜ ಸ್ಫೋಟ್ಸ್ ಕ್ಲಬ್ ಇದರ ವತಿಯಿಂದ ಸೇವೆ ಸಲ್ಲಿಸುತ್ತಿರುವ ಜೀವರಕ್ಷಕ ಅಂಬುಲೆನ್ಸ್ ನ ನಿರ್ವಹಣೆಗಾಗಿ ರೂ.5000 ದೇಣಿಗೆ ನೀಡಿ ಸಹಕರಿಸಿದರು.

 

ಇನ್ನು ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ಪಂಚಶ್ರೀ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕರಿಮಜಲು ರವರಿಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

Also Read  ಅನಧಿಕೃತ ಕಟ್ಟಡ ತಡೆಗೆ ಶೀಘ್ರದಲ್ಲಿ ಪ್ರಬಲ ಕಾನೂನು: ಸಿ.ಎಂ ಸಿದ್ದರಾಮಯ್ಯ

 

error: Content is protected !!
Scroll to Top