ಪಂಜದಲ್ಲಿ ನೂತನ ಅಂಗಡಿ ಮಾಲಕರಿಂದ ಅಂಬುಲೆನ್ಸ್ ಗೆ ದೇಣಿಗೆ

(ನ್ಯೂಸ್ ಕಡಬ) newskadaba.com ಸುಳ್ಯ. ,23: ಪಂಜದ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ಆ.22 ರಂದು ಶುಭಾರಂಭಗೊಂಡ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಫ್ಯಾಷನ್, ಪರಿವಾರ್ ಸ್ವೀಟ್ ಕಾರ್ನರ್ ಇದರ ಮಾಲಕರು ಪಂಚಶ್ರೀ ಪಂಜ ಸ್ಫೋಟ್ಸ್ ಕ್ಲಬ್ ಇದರ ವತಿಯಿಂದ ಸೇವೆ ಸಲ್ಲಿಸುತ್ತಿರುವ ಜೀವರಕ್ಷಕ ಅಂಬುಲೆನ್ಸ್ ನ ನಿರ್ವಹಣೆಗಾಗಿ ರೂ.5000 ದೇಣಿಗೆ ನೀಡಿ ಸಹಕರಿಸಿದರು.

 

ಇನ್ನು ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ಮಹೇಶ್ ಕುಮಾರ್ ಕರಿಕ್ಕಳ, ಪಂಚಶ್ರೀ ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕರಿಮಜಲು ರವರಿಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

 

error: Content is protected !!

Join the Group

Join WhatsApp Group