ಕೊಡೇರಿ ದೋಣಿ ದುರಂತ – ಉಳಿದ ಮೀನುಗಾರರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 18. ಕೊಡೇರಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರನ ಮೃತದೇಹ ಸೊಮವಾರ ಪತ್ತೆಯಾಗಿದ್ದರೆ, ಉಳಿದ ಮೂವರ ಮೃತದೇಹವು ಸೋಮವಾರ ರಾತ್ರಿ ಪತ್ತೆಯಾಗಿದೆ.

ಮೀನುಗಾರಿಕೆಗೆಂದು ತೆರಳಿದ್ದ ದೋಣಿಯು ಸಮುದ್ರದ ಅಲೆಗಳ ತೀವ್ರತೆಗೆ ಪಲ್ಟಿಯಾಗಿ ನಾಲ್ವರು ಮೃತಪಟ್ಟು, 7 ಮಂದಿ ಮೀನುಗಾರರನ್ನು ರಕ್ಷಿಸಲಾದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿತ್ತು. ಇದೀಗ ಸೋಮವಾರದಂದು ಈ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಇನ್ನು 7 ಮೀನುಗಾರರನ್ನು ಭಾನುವಾರ ರಕ್ಷಿಸಲಾಗಿತ್ತು. ಈ ನಾಲ್ವರು ಮೀನುಗಾರರು ಕೂಡಾ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಇನ್ನು ಮೀನುಗಾರರ ಮೃತದೇಹ ಪತ್ತೆಗಾಗಿ ಡ್ರೋನ್‌ ಕ್ಯಾಮೆರಾ ಸಹಾಯ ಪಡೆಯಲಾಗಿದೆ ಎಂದು ವರದಿಯಾಗಿದೆ. ಎರಡು ಬ್ರೇಕ್‌ ವಾಟರ್‌ಗಳ ಮಧ್ಯೆ ಡ್ರೋನ್‌ ಕ್ಯಾಮೆರಾವನ್ನು ಹಾರಿಸಿ ಪರಿಶೀಲನೆ ನಡೆಸಲಾಗಿದ್ದು ಆಗ ಒಬ್ಬರ ಮೃತಹೇಹ ಕಾಣಿಸಿಕೊಂಡಿದ್ದು ಅಲೆಗಳ ರಭಸದಿಂದಾಗಿ ಮೇಲಕ್ಕೆ ತರಲು ಆ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.

Also Read  ಕಡಬ: ಹೆರಿಗೆಯಾಗಿ ಮನೆಗೆ ತಲುಪುವಷ್ಟರಲ್ಲಿ ಮೃತಪಟ್ಟ ಆರು ದಿನಗಳ ಹಸುಗೂಸು ► ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆಯೆಂದು ಕುಟುಂಬದ ಆರೋಪ

error: Content is protected !!
Scroll to Top