ಮಂಗಳೂರು, ಮಾ.22: ರಾಜ್ಯದ್ಯಾಂತ ಭೀತಿ ಸೃಷ್ಟಿಸಿರು ಕೊರೋನ ವೈರಸ್ ಮಂಗಳೂರಿಗೆ ಕಾಲಿಟ್ಟಿದೆ.
ಭಟ್ಕಳ ಮೂಲದ 25ರ ಹರೆಯದ ಯುವಕ ಕೊರೋನ ಸೋಂಕು ಧೃಢಪಟ್ಟ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಈ ಯುವಕ ಮಾ.19ರಂದು ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ಪರೀಕ್ಷೆಗೊಳಪಡಿಸಿದಾಗ ಶಂಕಿತ ಕೊರೋನ ಪತ್ತೆಯಾಗಿತ್ತು.