ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ➤ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಹಿಂದೂ ಧರ್ಮದ ಗೀತಾಪೋದೇಶ ಮಾಡಿದ ಭಗವದ್ಗೀತೆಯ ಸಾರವನ್ನು ತಿಳಿಸುತ್ತಾ ಜೀವನದಲ್ಲಿ ಒಳ್ಳೆಯ ಸತ್ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗೋಣ ಎಂದು ಶ್ರೀ ಕಾಶಿನಾಥ್ ದಾಮ್ಲೆ ಅರಸಿನಮಕ್ಕಿ ಹೇಳಿದರು.


ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಬಾಲ್ಯದಲ್ಲಿ ಒತ್ತಡದ ಶಿಕ್ಷಣದ ಅಗತ್ಯವಿಲ್ಲ, ವಿದ್ಯಾರ್ಥಿಗಳ ಆಸಕ್ತಿಗನುಸಾರವಾದ ಶಿಕ್ಷಣಕ್ಕೆ ಪೋಷಕರು ಒತ್ತು ನೀಡಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಶ್ರೀಕೃಷ್ಣನ ಜೀವನ ಅವಧಿ ನಮಗೆ ಆದರ್ಶವಾಗಿದ್ದು ಮುಂದಿನ ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುವಂತಹ ಅವಶ್ಯಕತೆ ನಮ್ಮದಾಗಿದೆ. ನ್ಯಾಯ-ಅನ್ಯಾಯ, ಪಾಪ ಪುಣ್ಯಗಳ ಅರಿವನ್ನು ಮಕ್ಕಳಿಗೆ ತಿಳಿಸುತ್ತಾ ಗುರು ಹಿರಿಯರಿಗೆ ಗೌರವವನ್ನು ತೋರುವಂತಾಗಲಿ ಎಂದು ಸರಸ್ವತೀ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ನುಡಿದರು.


ಶ್ರೀಭಾರತಿ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೃಷ್ಣವೇಷ ಧರಿಸಿ ಕಡಬಪೇಟೆಯಲ್ಲಿ ಮೆರವಣಿಗೆಯ ಮೂಲಕ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಕುಣಿತ ಭಜನೆ ಆಕರ್ಷಣಿಯವಾಗಿತ್ತು.ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕಾರ್ಯದರ್ಶಿಗಳಾದ ಶ್ರೀಕೃಷ್ಣ ಶೆಟ್ಟಿ ಕಡಬ, ಶ್ರೀ ಭಾರತಿ ಶಿಶುಮಂದಿರದ ವ್ಯವಸ್ಥಾಪಕಿ ಶ್ರೀಮತಿ ಸವಿತಾ ಭಟ್, ಸರಸ್ವತೀ ಸಮೂಹಸಂಸ್ಥೆಗಳ ಆಡಲಿತಮಂಡಳಿ ನಿರ್ದೇಶಕರುಗಳಾದ ಶ್ರೀ ಶಿವಪ್ರಸಾದ್ ಮೈಲೇರಿ, ಶ್ರೀ ಲಿಂಗಪ್ಪ ಜೆ, ಎ.ಸೀತರಾಮ ಗೌಡ, ಉಮೇಶ್ ಶೆಟ್ಟಿ ಸಾಯಿರಾಮ್, ಶ್ರೀಮತಿ ಪುಲಾಸ್ತ್ಯ ರೈ, ಶ್ರೀಭಾರತಿ ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯರುಗಳಾದ ಗಿರೀಶ್ ಎ.ಪಿ, ರಾಮಚಂದ್ರ ಕೋಲ್ಪೆ, ಗುರುದೇವ್ ಹೆಬ್ಬಾರ್, ಸುದೀರ್ ಕಳಾರ, ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group