ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು➤ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು ಇವರು ಸಂಘದ ಅಧ್ಯಕ್ಷರಾಗಿರುವ ಬಿ ಧರ್ಮಣ್ಣ ನಾಯ್ಕ್ ಇವರ ನೇತೃತ್ವದಲ್ಲಿ ಹೊಸದಾಗಿ ನೇಮಕಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಇವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.

ಮತ್ತು ಶುಭೋದಯ ಕೂಡ್ಲು, ಕಾರ್ಯದರ್ಶಿ ಆರ್ ಲೋಹಿದಾಸ್, ಜೊತೆ ಕಾರ್ಯದರ್ಶಿ ಮೋಹನ್ ರಾವ್ ಹಾಗೂ ಸದಸ್ಯರಾದ ಬಿ.ಎನ್ ಸನಿಲ್, ಶ್ರೀನಿವಾಸ್ ನಾಯಕ್, ಸುರೇಶ್ ರಾವ್ ಮತ್ತು ಶಶಿಧರ್ ಶೆಟ್ಟಿಯವರು ಉಪಸ್ಥಿತರಿದ್ದರು.

Scroll to Top