ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23. ನಗರದ ಅಳಕೆಯ ಫಲ್ಗುಣಿ ನದಿ ಸಮೀಪ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಅಳಕೆ ಎಂಬಲ್ಲಿ ನಡೆದಿದೆ.

ಮೃತ ಬಾಲಕನನ್ನು ಅಡ್ಡೂರು ಸಮೀಪದ ನೂಹಿ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಮಂಗಳೂರಿನ ಮಹೇಶ್ ಕಾಲೇಜಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಅರ್ಶದ್ (17) ಎಂದು ಗುರುತಿಸಲಾಗಿದೆ. ಈತ ನಗರದ ಅಳಕೆಯ ಫಲ್ಗುಣಿ ನದಿ ಸಮೀಪದಲ್ಲಿ ಹೊಂಡವೊಂದಿದ್ದು, ಮಳೆಗಾಲವಾದುದರಿಂದ ಅದರಲ್ಲಿ ನೀರು ತುಂಬಿತ್ತು. ರವಿವಾರ ಸಂಜೆ ಅರ್ಶದ್ ಮತ್ತು ಆತನ ನಾಲ್ವರು ಸ್ನೇಹಿತರು ಆಟವಾಡಲೆಂದು ನೀರು ತುಂಬಿದ್ದ ಹೊಂಡದ ಸಮೀಪ ತೆರಳಿದ್ದರು. ಈ ಸಂದರ್ಭದಲ್ಲಿ ಅರ್ಶದ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆನ್ನಲಾಗಿದೆ.

error: Content is protected !!

Join the Group

Join WhatsApp Group