ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿನ ರಾಮಕುಂಜ ಗ್ರಾಮದ ಕೊಂದಪಡೆ ಶ್ರೀ ಅನಂತಪದ್ಮನಾಭೇಶ್ವರ ದೇವಳದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಈ ಕ್ಷೇತ್ರ ಸಂತಾನ ಪ್ರಾಪ್ತಿಗೆ ವಿಶೇಷತೆ ಪಡೆದಿದ್ದು, ನೂರಾರು ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಸಂಕಲ್ಪ ಮಾಡಿಕೊಂಡರು. ದೇವಳದ ಎದುರಿನ ಕೆರೆಯಲ್ಲಿ ಮಿಂದು ಅದೇ ಬಟ್ಟೆಯಲ್ಲಿ ದೇವರ ಎದುರು ಅರ್ಚಕರ ಮುಖಾಂತರ ಸಂಕಲ್ಪ ಮಾಡಿಕೊಳ್ಳುವುದು ಇಲ್ಲಿನ ವಾಡಿಕೆ. ಈ ಸಂದರ್ಭದಲ್ಲಿ ಅರ್ಚಕರು ನೀಡುವ ಮುಷ್ಟಿ ಅಕ್ಕಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ೧೦ ದಿವಸ ಈ ಅಕ್ಕಿಯನ್ನು ನಿತ್ಯ ಅನ್ನದೊಂದಿಗೆ ಬೇಯಿಸಿ ತಿನ್ನಬೇಕು ಎಂಬುದು ನಿಯಮ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಹಲವು ದಂಪತಿಗಳು ಹರಕೆ ಸಲ್ಲಿಸಿದರು.

error: Content is protected !!

Join the Group

Join WhatsApp Group