ಆಲಂಕಾರು: ಮದ್ಯ ಸೇವನೆಗೆ ಅವಕಾಶ ನೀಡಿದ ಅಂಗಡಿಗಳಿಗೆ ದಾಳಿ ► ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.19. ತಮ್ಮ ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಆಲಂಕಾರಿನ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿರುವ ಕಡಬ ಪೊಲೀಸರು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆಲಂಕಾರು ಗ್ರಾಮದ ಸುರುಳಿ ಬಳಿಯ ಲಕ್ಷ್ಮೀ ಚಿಕನ್ ಸೆಂಟರ್ ನ ರವೀಂದ್ರ, ಆಲಂಕಾರು ಪೇಟೆಯಲ್ಲಿರುವ ಮಯೂರ ಎಂಟರ್ ಪ್ರೈಸಸ್ ನ ವಿನಯ.ಕೆ, ಮತ್ತು ಆಲಂಕಾರು ವರ್ಕ್ ಶಾಪಿನ ತೆರೆದ ಶೆಡ್ನಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ರಾಘವೇಂದ್ರ ಗೌಡ ಬಂಧಿತ ಆರೋಪಿಗಳು. ಆರೋಪಿಗಳು ತಮ್ಮ ಅಂಗಡಿಯಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ಎ.ಎಸ್.ಐ.ಗಳಾದ ರವಿ, ಚಂದ್ರಶೇಖರ್ ದಾಳಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಬೆಳ್ತಂಗಡಿ: 9ನೇ ತರಗತಿಯ ಬಾಲಕ ಆತ್ಮಹತ್ಯೆ

error: Content is protected !!
Scroll to Top