ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಂಚಕಾರ ► ಬೆಂಗಳೂರು ಪ್ರಯಾಣಿಸುವವರಿಗೆ ಸಂಪಾಜೆಯೇ ಉಪಕಾರ

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಳೆಯ ಪ್ರಮಾಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ವಿವಿಧೆಡೆ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ತೊಡಕುಂಟಾಗಿದೆ.

ಸೋಮವಾರದಂದು ಘಾಟ್ ರಸ್ತೆಯ ಎರಡನೇ ಹಾಗೂ ಮೂರನೇ ತಿರುವಿನ ಮಧ್ಯೆ ಮಣ್ಣು ಕುಸಿದು ಬಿದ್ದುದರಿಂದ ರಸ್ತೆ ತಡೆಯುಂಟಾಗಿ ಹಸನಬ್ಬ ಚಾರ್ಮಾಡಿ ಹಾಗೂ ಅವರ ತಂಡವು ಶ್ರಮವಹಿಸಿ ಒಂದು ಹಂತದ ತಡೆಯನ್ನು ತೆರವುಗೊಳಿಸಿದ ಪರಿಣಾಮ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಂಗಳವಾರದಂದು ಮತ್ತೆ ಬ್ಲಾಕ್ ಆಗಿದ್ದು, ಚಾರ್ಮಾಡಿಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Also Read  11 ವರ್ಷಗಳ ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸ್ನೇಹ ಸಮ್ಮಿಲನ

ಬೆಂಗಳೂರು, ಹಾಸನ, ಚಿಕ್ಕಮಗಳೂರು ಮತ್ತಿತರ ಭಾಗಗಳಿಂದ ಧರ್ಮಸ್ಥಳ, ಮಂಗಳೂರು, ಉಡುಪಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕುದುರೆಮುಖ ಅಥವಾ ಸಂಪಾಜೆ ಘಾಟಿ ರಸ್ತೆಯನ್ನು ಬಳಸುವುದು ಒಳಿತು.

error: Content is protected !!
Scroll to Top