(ನ್ಯೂಸ್ ಕಡಬ) newskadaba.com, ಆ.24: ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ ₹60 ರಿಂದ ₹75 ತಲುಪಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹10 ರಿಂದ ₹20 ಹೆಚ್ಚಳವಾಗಿದೆ.ಮುಂಗಾರು ಮಳೆ ಅಭಾವದಿಂದ ಶೇ. 70ರಷ್ಟು ಇಳುವರಿ ಕುಸಿತಗೊಂಡಿದ್ದು, ದಾಸ್ತಾನು ಕೊರತೆ ಉಂಟಾಗಿದೆ.
ರಫ್ತು ಮುಂದುವರಿದಿದ್ದು, ಹೊರಗಿನಿಂದ ಆಮದು ಸಂಪೂರ್ಣ ಸ್ಥಗಿತಗೊಂಡಿದೆ.ಶ್ರಾವಣ ಮತ್ತು ಹಬ್ಬದ ಋತು ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೆ.ಜಿ.ಗೆ ₹100 ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.








