(ನ್ಯೂಸ್ ಕಡಬ) newskadaba.com, ಆ.15 :80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶವನ್ನು ಉದ್ದೇಶಿಸಿ ಸಂದೇಶ ನೀಡಿದರು. ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ನೆನಪಿಗಾಗಿ ಹಾಗೂ ‘ವಿಕಸಿತ ಭಾರತ@2047’ ಪರಿಕಲ್ಪನೆಯ ಯುವಶಕ್ತಿಗೆ ಈ ಬಾರಿಯ ಸಮಾರಂಭವನ್ನು ಸಮರ್ಪಿಸಲಾಗಿದೆ.
ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ ಪಟ್ಟಿಯಿಂದ ಹೊರಬಂದು ಇಂದು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಬೃಹತ್ ಅರ್ಥವ್ಯವಸ್ಥೆಯಾಗಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಉಲ್ಲೇಖಿಸಿದರು.ಕೇಂದ್ರ ಸಚಿವರು, ರಾಜತಾಂತ್ರಿಕರು, ಸೇನಾಪಡೆಗಳ ಮುಖ್ಯಸ್ಥರು ಹಾಗೂ ಸಾವಿರಾರು ಯುವಜನರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಇಡೀ ಕೆಂಪುಕೋಟೆಯ ಆವರಣ ದೇಶಭಕ್ತಿಯಿಂದ ಕಂಗೊಳಿಸಿದ್ದು, ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಹರ್ಷದಿಂದ ಆಚರಿಸಲಾಯಿತು.





