ಕಾಡಾನೆ ನಿಯಂತ್ರಣಕ್ಕೆ ಟಾಸ್ಪ್ ಫೋರ್ಸ್ ರಚಿಸಿದ ರಾಜ್ಯ ಸರಕಾರ



(ನ್ಯೂಸ್ ಕಡಬ) newskadaba.com ಮಾ. 05. ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ಹಾಗೂ ಮಾನವ ಸಂಘರ್ಷ ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಎಲಿಫಂಟ್ ಟಾಸ್ಕ್ ಫೋರ್ಸ್ ರಚನೆಗೆ ಆದೇಶ ಹೊರಡಿಸಿದೆ.





ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳ ಚಲನೆ ಹೆಚ್ಚುತ್ತಿರುವ ಹಿನ್ನೆಲೆ, ಗ್ರಾಮ ಪ್ರದೇಶಗಳಲ್ಲಿ ಬೆಳೆ ನಷ್ಟ ಹಾಗೂ ಮಾನವ ಜೀವಹಾನಿ ಸಂಭವಿಸುವ ಪ್ರಕರಣಗಳನ್ನು ನಿಯಂತ್ರಿಸಲು ವಿಶೇಷ ತಂಡವನ್ನು ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಪ್ರಕಾರ ಒಟ್ಟು 28 ಸಿಬ್ಬಂದಿಯನ್ನು ಒಳಗೊಂಡ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಉಪಸಂರಕ್ಷಣಾಧಿಕಾರಿ, 2 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, 25 ವಾಚರ್ ಅಥವಾ ಬೀಟ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.






ಟಾಸ್ಕ್ ಫೋರ್ಸ್ ತಂಡಕ್ಕೆ ಹಲವು ಜವಾಬ್ದಾರಿಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಕಾಡಾನೆಗಳ ಚಲನವಲನಗಳನ್ನು ನಿರಂತರವಾಗಿ ಗಮನಿಸುವುದು, ಗ್ರಾಮ ಪ್ರದೇಶಗಳಿಗೆ ಕಾಡಾನೆಗಳು ಪ್ರವೇಶಿಸುವುದನ್ನು ತಡೆಯುವ ಕ್ರಮ, ಮಾನವ-ಾನೆ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ತಕ್ಷಣದ ಕಾರ್ಯಾಚರಣೆ, ಅಗತ್ಯವಿದ್ದರೆ ಕಂಟ್ರೋಲ್ ರೂಂ ಮೂಲಕ ಸಮನ್ವಯ ಸಾಧಿಸುವುದು, ಸ್ಥಳೀಯರಿಗೆ ಎಚ್ಚರಿಕೆ ಹಾಗೂ ಮಾಹಿತಿ ನೀಡುವುದು  ಪ್ರಮುಖವಾಗಿದೆ.

error: Content is protected !!
Scroll to Top