ಮಳೆ ಬರುವಾಗ ಮಾತ್ರ ಬರುವ ಈ ಕೀಟಗಳ ಹಾವಳಿಗೆ ಕೆಲವು ಟಿಪ್ಸ್..!



(ನ್ಯೂಸ್ ಕಡಬ) newskadaba.com ಜೂ. 21. ಮಳೆಗಾಲದ ಸಮಯದಲ್ಲಿ ಒಂದು ಜಾತಿಯ ಕೀಟವೊಂದು ಮನೆಯ ಮುಂದೆ, ಮನೆ ಒಳಗೆ ಎಲ್ಲೆಂದರಲ್ಲಿ ಅದರ ರೆಕ್ಕೆ ತುಂಡಾಗಿ ಬಿದ್ದಿರುತ್ತವೆ. ಮಳೆ ಬಂದ ಎರಡು ಮೂರು ದಿನಗಳವರೆಗೆ ಹಾಗೆಯೇ ಅಲ್ಲಲ್ಲಿ ಬಿದ್ದಿರುತ್ತವೆ. ಈ ಕೀಟವು ಬಲ್ಬ್ ನ ಬೆಳಕಿಗೆ ಹೆಚ್ಚಾಗಿ ಮನೆ ಒಳಗೆ ಪ್ರವೇಶಿಸುತ್ತವೆ. ಇದಕ್ಕೆ ಈಗಲೂ ಹೆಚ್ಚಾಗಿ ಹಳ್ಳಿ ಕಡೆ ಹೊರಗಿನ ಬಲ್ಬ್ ನ್ನು ಮಾತ್ರ ಉರಿಸಿ ಒಳಗೆ ಕತ್ತಲು ಮಾಡಿ ಒಳಬರದಂತೆ ತಡೆಯುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣ ಇದೆಯೋ ಇಲ್ವೋ ಗೊತ್ತಿಲ್ಲ ಆದರೂ ಈ ಬೆಳಕನ್ನು ಆಫ್ ಮಾಡುವುದರಿಂದ ಮನೆಯೊಳಗೆ ಪ್ರವೇಶಿಸುವುದಿಲ್ಲ. ಹೀಗೆ ನಿಮ್ಮ ಮನೆಯಲ್ಲೂ ಈ ಮಳೆ ಬರುವಾಗ ಇಂತಹ ಕೀಟಗಳ ಕಾಟ ಶುರುವಾಗುತ್ತಾ ಹಾಗಾದ್ರೆ ಈ ಕೀಟಗಳು ಬಾರದಂತೆ ತಡೆಯಲು ಇಲ್ಲಿದೆ ಕೆಲವೊಂದು ಟಿಪ್ಸ್.





ನಿಂಬೆ ರಸ- ನಿಂಬೆ ರಸವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಕೀಟಗಳ ಮೇಲೆ ಸಿಂಪಡಿಸಿ. ಹೀಗೆ ಮಾಡೋದರಿಂದ ಕೀಟಗಳು ಓಡಿ ಹೋಗುತ್ತವೆ.






 

ಲವಂಗದ ನೀರಿನ ಸ್ಪ್ರೇ- ಮಳೆಗಾಲದಲ್ಲಿ ಕೀಟಗಳನ್ನು ತೊಡೆದುಹಾಕಲು ಈ ಸರಳ ಸ್ಪ್ರೇ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಈ ಸ್ಪ್ರೇ ಮಾಡಲು, ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಈ ನೀರಿಗೆ ಲವಂಗ ಸೇರಿಸಿ. ನೀರಿನ ಬಣ್ಣ ಬದಲಾದಾಗ, ಅದಕ್ಕೆ ಒಂದು ಚಮಚ ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ತಣ್ಣಗಾಗಿಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ. ಈಗ ನೀವು ಕೆಲವು ಬೇಡದ ಎಲೆಗಳನ್ನು ಕತ್ತರಿಸಿ ಅದಕ್ಕೆ ಸೇರಿಸಬೇಕು. ಈಗ ನಿಮ್ಮ ಸ್ಪ್ರೇ ಸಿದ್ಧವಾಗಿದೆ. ಈ ಸ್ಪ್ರೇ ಅನ್ನು ಕೀಟಗಳ ಮೇಲೆ ಸಿಂಪಡಿಸಿ, ಇದರಿಂದ ಕೀಟಗಳು ಓಡಿಹೋಗುತ್ತವೆ.

 

ಬಿಳಿ ವಿನೆಗರ್- ಸ್ಪ್ರೇ ಬಾಟಲಿಯಲ್ಲಿ ವಿನೇಗರ್ ತುಂಬಿಸಿ ಕೀಟಗಳ ಮೇಲೆ ಸಿಂಪಡಿಸಿ ಅಥವಾ ವಿನೆಗರ್ ನೀರಿನಿಂದ ನೆಲವನ್ನು ಒರೆಸಿ. ಹೀಗೆ ಮಾಡುವುದರಿಂದ, ಕೀಟಗಳು ನೆಲದಿಂದ ಓಡಿಹೋಗುತ್ತವೆ.

 

ಉಪ್ಪು- ಕೀಟಗಳನ್ನು ಕೊಲ್ಲಲು ಉಪ್ಪು ಅಥವಾ ಉಪ್ಪು ನೀರನ್ನು ಅವುಗಳ ಮೇಲೆ ಸಿಂಪಡಿಸಬಹುದು. ಇದು ಕೀಟಗಳನ್ನು ಕೊಲ್ಲುತ್ತದೆ.

 

ಬೆಳ್ಳುಳ್ಳಿ- ಬೆಳ್ಳುಳ್ಳಿಯನ್ನು ಪುಡಿಮಾಡಿ ನೀರಿಗೆ ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಈ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಮಿಶ್ರಣವು ಕೀಟಗಳನ್ನು ಓಡಿಸುತ್ತದೆ.

error: Content is protected !!
Scroll to Top