(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ಶ್ರೀನಿವಾಸ ವಿಶ್ವವಿದ್ಯಾಲಯವು ಗೌರವಾನ್ವಿತ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಮತ್ತು ಉಪಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಪಾಂಡೇಶ್ವರದ ನೂತನ ಕ್ಯಾಂಪಸ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರದಂದು ಆಚರಿಸಿತು.
ಕಾರ್ಯಕ್ರಮವನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ಹಾಗೂ ಯೋಗ ಗುರು ಶ್ರೀ ಮುಸ್ತಫಾ, ಭಾರತ್ ಕನ್ ಸ್ಟ್ರಕ್ಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಉದ್ಘಾಟಿಸಿದರು. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಶ್ರೀ ಮುಸ್ತಫಾ ಅವರು ಸ್ವಾಸ್ಥ್ಯ ಕಾಳಜಿಯ ಮಹತ್ವವನ್ನು ವಿವರಿಸುತ್ತಾ, ನೀವು ನಿಮ್ಮ ಜೀವನದ ಸಂಗಾತಿಯನ್ನು ಪ್ರೀತಿಸಬೇಕು – ಆ ಸಂಗಾತಿ ನಿಮ್ಮದೇ ಶರೀರ. ಅದನ್ನು ಪ್ರೀತಿಯಿಂದ ಪಾಲನೆ ಮಾಡುವುದು ಯೋಗದ ಮೂಲಕ ಸಾಧ್ಯ. ಆರೋಗ್ಯವೆಂಬ ಕಿರೀಟವನ್ನು ಅಸ್ವಸ್ಥ ವ್ಯಕ್ತಿಯೇ ಹೆಚ್ಚು ಅರ್ಥ ಮಾಡಿಕೊಳ್ಳುತ್ತಾನೆ. ಆತ್ಮಪ್ರೇಮ ಅತ್ಯಂತ ಅಗತ್ಯವಾದದ್ದು. ನಿರಂತರವೆನ್ನುವ ದಿನಚರಿಯಲ್ಲಿ ಸ್ವ-ನಿಗದಿಗಾಗಿ ಸಮಯ ಮೀಸಲಿಡುವುದು ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯ ಎಂದರು.
ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳಾದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್ (IMC), ಇನ್ಸ್ಟಿಟ್ಯೂಟ್ ಆಫ್ ಫಿಸಿಯೊಥೆರಪಿ (IP), ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಆಂಡ್ ಟೂರಿಸಮ್(IHM), ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ (ICIS), ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ (IE), ಹಾಗೂ ಇನ್ಸ್ಟಿಟ್ಯೂಟ್ ಆಫ್ ಪೋರ್ಟ್ ಶಿಪಿಂಗ್ ಆಂಡ್ ಲಾಜಿಸ್ಟಿಕ್ ಮ್ಯಾನೇಜ್ ಮೆಂಟ್ (IPSLM)ಗಳ ಉಪನ್ಯಾಸಕರು ಯೋಗದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಡಾ. ವೆಂಕಟೇಶ್ ಎಸ್. ಅಮೀನ್ ಡೀನ್, IMC, ಡಾ. ಪದ್ಮನಾಭ ಸಿ.ಹೆಚ್. ಡೀನ್, IE, ಡಾ. ಸುಬ್ರಮಣ್ಯ ಭಟ್ ಡೀನ್, ICIS, ಡಾ. ತೃಷಾಲಾ ನೊರೋನ್ಹಾ ಡೀನ್, IP, ಹಾಗೂ ಪ್ರೊ. ಪ್ರಶಾಂತ್ ಪ್ರಭು ಡೀನ್, IHM ಉಪಸ್ಥಿತರಿದ್ದರು. ಡಾ. ಅಜಯ್ ಕುಮಾರ್ ಸ್ವಾಗತಿಸಿ, ಪ್ರೊ. ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು









