(ನ್ಯೂಸ್ ಕಡಬ) newskadaba.com ಕಡಬ, ಜೂ. 21. ಕಡಬ ತಾಲೂಕು ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿಗೆ ಸೇರಿದ ತಮಿಳು ನಿರಾಶ್ರಿತರಿಗೆ ನಿವೇಶನ ದೊರಕಿಸಿ ಕೊಟ್ಟವರನ್ನು ನಿರಾಶ್ರಿತರು ಸೇರಿಕೊಂಡು ಸನ್ಮಾನಿಸಿದ್ದಾರೆ.
ಅಧಿಕಾರಿಗಳಾದ ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ನಿವೇಶನಕ್ಕೆ ಶ್ರಮಿಸಿದ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕರಾದ ವಸಂತ ಕುಬಲಾಡಿ ಅವರನ್ನು ಕಡಬ ತಾಲೂಕು ಸೌಧದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹನುಮಂತ, ಕುಮಾರನ್, ವಿಜಯ, ವರದರಾಜ್, ಜಯ ಕುಮಾರ್, ಶಿವಜ್ಞಾನ ಸೆಲ್ವಂ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.









