ದೇಶಕ್ಕೆ ಬರುವ ಬೆದರಿಕೆಗಳ ವಿರುದ್ದ ಸರ್ಕಾರ ಕ್ರಮ-ರಾಜನಾಥ್ ಸಿಂಗ್

(ನ್ಯೂಸ್ ಕಡಬ) newskadaba.com, . 12. ದೇಶಕ್ಕೆ ಬರುವಂತಹ ಸಮಕಾಲೀನ ಬೆದರಿಕೆಗಳನ್ನು ನಿಭಾಯಿಸುವ ಸಲುವಾಗಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಂದು ದೆಹಲಿ ರಕ್ಷಣಾ ಮಾತುಕತೆ- 2024ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಒತ್ತು ನೀಡಿ, ಬಾಹ್ಯ ಬೆದರಿಕೆಗಳ ವಿರುದ್ಧವೂ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಮಾತ್ರವಲ್ಲದೆ, ಅನೇಕ ದೇಶಗಳು ವಿವಿಧ ರೂಪದ ಭದ್ರತಾ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿಂದೆ ಗಡಿ ಸಂಬಂಧಿತ ಬೆದರಿಕೆಗಳು ಪ್ರಮುಖವಾಗಿದ್ದವು. ಆದರೆ ಈಗ ಭಯೋತ್ಪಾದನೆ, ಸೈಬರ್ ದಾಳಿಗಳು ಮತ್ತು ಹೈಬ್ರಿಡ್ ಯುದ್ಧ ವಿಷಯಗಳು ಸಹ ಪ್ರಮುಖವಾಗುತ್ತಿವೆ. ಇವನ್ನು ಎದುರಿಸಲು ಆಧುನಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

Also Read  406 ನಗರಗಳಲ್ಲಿ ಮತ್ತೆ ರಿಲಯನ್ಸ್ ಜಿಯೊ 5ಜಿ ನೆಟ್‌ವರ್ಕ್ ಸೇವೆ ಆರಂಭ

error: Content is protected !!
Scroll to Top