ಮನಸ್ಥಿತಿಯಿಂದ ಸಂತೋಷದ ಜೀವನ: ಇಲ್ಲಿವೆ ಸಿಂಪಲ್ ಸೂತ್ರಗಳು..!

(ನ್ಯೂಸ್ ಕಡಬ)newskadaba.com ಅ. 04.  ನಾವೆಲ್ಲರೂ ಕಾಳಜಿ ವಹಿಸುವುದು ಹೆಚ್ಚು ಪ್ರೀತಿಸುವುದರಿಂದ ಯಾರನ್ನಾದರೂ ಹೆಚ್ಚು ಖುಷಿಯಿಂದಿರಿಸಬಹುದು ಎಂದು ಭಾವಿಸುತ್ತೇವೆ. ಆದರೆ ಒಮ್ಮೊಮ್ಮೆ ಅತಿಯಾದ ಕಾಳಜಿ ಕೂಡ ದುಃಖಕ್ಕೆ, ನಿರಾಸೆಗೆ ಕಾರಣವಾಗುತ್ತದೆ. ಹಾಗಾಗಿ ಜೀವನದಲ್ಲಿ ಇನ್ನೊಬ್ಬರನ್ನು ಅನುನಯಿಸುವುದು ಹಾಗೂ ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕೆಂದು ಹಾಗೆಯೇ ಇರುವುದಕ್ಕೆ ಅಂಟಿಕೊಳ್ಳದಿರಿ. ಈ ಲೇಖನದಲ್ಲಿ ಸರಿಯಾಗಿ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಸರಿಯಾದ ಕಾಳಜಿಯೇ ಸಂತೋಷಕರ ಜೀವನಕ್ಕೆ ರಹದಾರಿಯಾಗಿದೆ.

ಅಪೂರ್ಣತೆಯನ್ನು ಅಳವಡಿಸಿಕೊಳ್ಳಿ

ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸದಿರಿ. ಹೀಗೆಯೇ ಇರಬೇಕು ಇದೇ ರೀತಿ ನಡೆಯಬೇಕು ಎಂದು ಹೆಚ್ಚು ತಲೆಕೆಡಿಸಿಕೊಳ್ಳದಿರಿ. ಅಪೂರ್ಣತೆಯನ್ನು ಕೂಡ ಅಳವಡಿಸಿಕೊಳ್ಳಿ. ಇದರಿಂದ ನೀವು ಹೆಚ್ಚು ಖುಷಿಯಾಗಿ ಆನಂದಕರವಾಗಿ ಇರಬಹುದು. ಅಪೂರ್ಣತೆಯನ್ನು ಅಳವಡಿಸಿಕೊಳ್ಳುವುದು ಸರಿಯಾಗಿ ಕಾಳಜಿಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ತಂತ್ರವಾಗಿದೆ. ವಿಫಲತೆಯನ್ನು ಸ್ವೀಕರಿಸುವುದು ಏಳು ಬೀಳುಗಳನ್ನು ಬಂದಂತೆ ತೆಗೆದುಕೊಳ್ಳುವುದು ನಮ್ಮ ಜೀವನದ ನಿಜವಾದ ಖುಷಿಯಾಗಿದೆ.

error: Content is protected !!

Join WhatsApp Group

WhatsApp Share