ಕುಂದಾಪುರ: ಚಲಿಸುತ್ತಿದ ಸ್ಕೂಟರ್ ಮೇಲೆ ಮರದ ಕೊಂಬೆ ಬಿದ್ದು ಗಾಯ

 (ನ್ಯೂಸ್ ಕಡಬ) newskadaba.com ಕುಂದಾಪುರ(ಸೆ.25) : ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಸ್ಕೂಟರ್ ಸವಾರ ಗಂಗೊಳ್ಳಿ ನಿವಾಸಿ, ಮಸೀದಿ ಧರ್ಮಗುರು, ಜನಾಬ್ ಮೌಲಾನ ಮೊಹಮ್ಮದ್ ಮತೀನ್ ಸಾಹಬ್ ಸಿದ್ದಿಕಿ ಗಾಯಗೊಂಡ ಘಟನೆ ತ್ರಾಸಿ ಹೋಲೀ ಕ್ರಾಸ್ ಸಮೀಪ ರಸ್ತೆಯಲ್ಲಿ ನಡೆದಿದೆ. ರಸ್ತೆ ಪಕ್ಕದಲ್ಲಿದ್ದ ಮರದ ಕೊಂಬೆ ಇವರು ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದಿದೆ. ಘಟನೆಯಿಂದ ಅವರ ತಲೆ ಹಾಗೂ ಕುತ್ತಿಗೆಗೆ ಒಳ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Also Read  ಪುತ್ತೂರು :ಕಾರು ಹಾಗೂ ಓಮ್ನಿ ನಡುವೆ ಅಪಘಾತ

error: Content is protected !!
Scroll to Top