ಉರುಳಿಗೆ ಬಿದ್ದ ಬೃಹತ್ ಗಾತ್ರದ ‘ಉಡ’ – ಉರಗತಜ್ಞರಿಂದ ರಕ್ಷಣೆ

(ನ್ಯೂಸ್ ಕಡಬ) newsksdaba.com ಪುತ್ತೂರು, ಸೆ. 06. ನೈಲಾನ್‌ ಹಗ್ಗ ಕುತ್ತಿಗೆಗೆ ಬಿಗಿದು ಒದ್ದಾಡುತ್ತಾ ಪ್ರಾಣಾಪಾಯದಲ್ಲಿದ್ದ ಉಡವೊಂದನ್ನು ಪುತ್ತೂರಿನ ಖ್ಯಾತ ಉರಗತಜ್ಞ ಡಾ. ರವೀಂದ್ರನಾಥ್ ಐತಾಳ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಪುತ್ತೂರು ನಗರದ ಸೂತ್ರಬೆಟ್ಟುವಿನಲ್ಲಿ ಯಾರೋ ಇಟ್ಟ ನೈಲಾನ್‌ ಹಗ್ಗದ ಉರುಳಿಗೆ ಉಡ ಸಿಕ್ಕಿಬಿದ್ದಿದ್ದು, ಅದು ಹೇಗೂ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡ ಪರಿಣಾಮ ಉಸಿರಾಡಲು ಕಷ್ಟಪಡುತ್ತಿದ್ದ ಉಡವನ್ನು ಕಂಡ ಸ್ಥಳೀಯರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಐತಾಳರು ಉರುಳಿನಿಂದ ಉಡಕ್ಕೆ ಮುಕ್ತಿ ನೀಡಿ ಸ್ವತಂತ್ರ್ಯವಾಗಿ ಬಿಡಲಾಯಿತು.

Scroll to Top