ಕಾಣಿಕೆ ಡಬ್ಬಿಗೆ ಕನ್ನ- ನಗದು ಕಳವು

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಆ. 30. ಶ್ರೀ ನಾರಾಯಣ ಗುರು ಮಂದಿರದ ಕಿಟಿಕಿಯ ಮರದ ಮೂರು ದಳಿಗಳನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಮಂದಿರದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಸುಮಾರು 15,000 ರೂ. ನಗದನ್ನು ಕಳವುಗೈದಿರುವ ಘಟನೆ ಮುದರಂಗಡಿ ಎಂಬಲ್ಲಿ ನಡೆದಿದೆ.


ಮಂಗಳವಾರದಂದು ಬೆಳಗ್ಗೆ ಅರ್ಚಕ ಆನಂದ ಪೂಜಾರಿ ಮಂದಿರಕ್ಕೆ ಬಂದಾಗ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಪಡುಬಿದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.

Scroll to Top