ತೀವ್ರ ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ➤ ಕೇವಲ 256 ಮತಗಳ ಅಂತರದಿಂದ ಅಶೋಕ್ ರೈ ಮುನ್ನಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ತೀವ್ರ ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರವು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ‌ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿದ್ದು, ಇದೀಗ ಹನ್ನೆರಡನೇ ಸುತ್ತಿನ ಮತ ಎಣಿಕೆಯಲ್ಲಿ ಕೇವಲ 256 ಮತಗಳ ಅಂತರದಿಂದ ಅಶೋಕ್ ರೈ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಐದು ಸುತ್ತಿನ ಮತ ಎಣಿಕೆ ಬಾಕಿ ಉಳಿದಿದ್ದು, ಕೊನೆ ಕ್ಷಣದಲ್ಲಿ ಫಲಿತಾಂಶ ತಲೆ ಕೆಳಗಾಗುವ ಸಂಭವವಿದೆ.

Scroll to Top