ಸುಳ್ಯ ದಿನಸಿ ಅಂಗಡಿ ಬೆಂಕಿಗಾಹುತಿ… ಸುಟ್ಟು ಕರಕಲಾದ ಅಂಗಡಿ ಸಾಮಗ್ರಿ

(ನ್ಯೂಸ್ ಕಡಬ) newskadaba.com. ಸುಳ್ಯ,  ಮೇ.1. ದಿನಸಿ ಅಂಗಡಿಗೆ ಬೆಂಕಿ ಬಿದ್ದು ಸಾಮಗ್ರಿ ಸುಟ್ಟು ಹೋಗಿರುವ ಘಟನೆ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ರವಿವಾರ ಸಂಭವಿಸಿದೆ.  ಅರಂಬೂರಿನ ಕರ್ನಾಟಕ ಫ್ಲೈ ವುಡ್‌ ಫ್ಯಾಕ್ಟರಿಯ ಎದುರಿನಲ್ಲಿರುವ ದಿವಾಕರ ಮಾಸ್ತರ್‌ ಎಂಬವರಿಗೆ ಸೇರಿದ ಅಂಗಡಿಯಲ್ಲಿ ದುರಂತ ಸಂಭವಿಸಿದೆ.

ಕಟ್ಟಡದೊಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಫ್ಲೈ ವುಡ್‌ ಫ್ಯಾಕ್ಟರಿ ಕಾರ್ಮಿಕರು ಸ್ಥಳೀಯರಿಗೆ ತಿಳಿಸಿದ್ದಾರೆ. ಅಂಗಡಿ ಕಟ್ಟಡದ ಹಿಂದುಗಡೆಯಲ್ಲೇ ದಿವಾಕರ ಮಾಸ್ತರ್‌ ವಾಸ್ತವ್ಯ ಇದ್ದರು. ಸ್ಥಳೀಯರು ಸೇರಿ ಅಂಗಡಿಯ ಶಟರ್‌ ತೆರೆದು ನೋಡಿದಾಗ ಎಲ್ಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದವು. ಸುಳ್ಯ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಘಟನೆಗೆ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Scroll to Top