ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಬೆಂಕಿ ಹಚ್ಚಿದ ಪತಿ.!  ➤ಆರೋಪಿ ಬಂಧನ

(ನ್ಯೂಸ್ ಕಡಬ)Newskadaba.com ದೆಹಲಿ,ಏ.28 ಪತ್ನಿಯನ್ನು ಕೊಂದು ತುಂಡರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಇಲ್ಲಿನ ಮನೇಸರ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನೇಸರ್‌ನ ಹಳ್ಳಿಯೊಂದರಲ್ಲಿ ಮಹಿಳೆಯ ಅರ್ಧ ಸುಟ್ಟ ಮುಂಡ ಪತ್ತೆಯಾಗಿದ್ದು, ಆಕೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಮಹಿಳೆಯ ತಲೆ ಕಾಣೆಯಾಗಿದ್ದು, ಆಕೆಯ ಕೈಗಳನ್ನು ಕತ್ತರಿಸಲಾಗಿದೆ.

ಆರೋಪಿ ಜಿತೇಂದರ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಕಲಾ ರಾಮಚಂದ್ರನ್ ಹೇಳಿದ್ದಾರೆ.ಆರೋಪಿ ಜಿತೇಂದರ್ ಗಾಂಧಿನಗರದ ನಿವಾಸಿಯಾಗಿದ್ದು, ಮನೇಸರ್ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಕುಕ್ಡೋಲಾ ಗ್ರಾಮದ ಉಮೇದ್ ಸಿಂಗ್ ಎಂಬುವರು ಗುತ್ತಿಗೆ ಪಡೆದ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಎರಡು ಕೊಠಡಿಗಳಲ್ಲಿ ಒಂದರಿಂದ ಮಹಿಳೆಯ ಶವ ಪತ್ತೆಯಾಗಿದೆ.

Also Read  ಚಲಿಸುತ್ತಿದ್ದ ಬಸ್ ನಿಂದ ಹೊರಗಡೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ

 

 

error: Content is protected !!
Scroll to Top