ಚರಂಡಿಯಲ್ಲಿ ಸಿಕ್ಕ ಮೃತದೇಹದ ಕೇಸ್ ಗೆ ಟ್ವಿಸ್ಟ್.! ➤ ಯುವಕನಿಗೆ ಅಪಹರಿಸಿ ಹಲ್ಲೆ ನಡೆಸಿ ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.11. ಕಳ್ಳತನದ ಆರೋಪದಲ್ಲಿ ಯುವಕನನ್ನು ವಾರದ ಕಾಲ ಕೂಡಿ ಹಾಕಿ ಹಲ್ಲೆ ನಡೆಸಿ‌ ಕೊಲೆ ಮಾಡಿ ಚರಂಡಿಗೆ ಎಸೆದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಚರಂಡಿಯಲ್ಲಿ ಸಿಕ್ಕ ಕೊಳೆತ ಮೃತದೇಹ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.


ಸೈಫುಲ್ಲಾ(36) ಎಂಬುವನಿಗೆ ಕೊಲೆ ಮಾಡಿ ಚರಂಡಿಗೆ ಮೃತದೇಹ ಎಸೆದಿದ್ದ ಆರೋಪದಡಿ ಗುಜರಿ ಅಂಗಡಿ ಮಾಲೀಕ ಸೇರಿ ಮೂವರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್, ಜಬಿ ಹಾಗೂ ಶಾಬಾಜ್ ಎಂಬಾತನನ್ನು ಬಂಧಿಸಲಾಗಿದೆ.

Scroll to Top