ಮಂಗಳೂರು: ಬರೊಬ್ಬರಿ 1ಕೋಟಿ ರೂ.ವಂಚನೆ ➤ ಕೇರಳ ಮೂಲದ ಆರೋಪಿ ಅರೆಸ್ಟ್ 

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. ಹೂಡಿಕೆದಾರರಿಗೆ 1 ಕೋಟಿ ರೂ.ವಂಚಿಸಿದ ಆರೋಪದ ಮೇಲೆ ಮಂಗಳೂರು ಸೆನ್  ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಕೇರಳದ ಕ್ಯಾಲಿಕಟ್ ನಿವಾಸಿ ಜಿಜೋ ಜಾನ್ ಪಿ ಕೆ(29) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಶಕ್ತಿನಗರದ ಹೂಡಿಕೆದಾರರಿಂದ ಹೆಚ್ಚಿನ ಆದಾಯವನ್ನು ತಂದುಕೊಡುವ ಭರವಸೆ ನೀಡಿ, ಹಣವನ್ನು ಪಡೆದುಕೊಂಡಿದ್ದ. ಇದೀಗ ಆತನ ಭರವಸೆ ಸುಳ್ಳು ಎಂದು ಸಾರ್ವಜನಿಕರಿಗೆ ತಿಳಿದುಬಂದಿದ್ದು, ಹಣವನ್ನು ಹಿಂದಿರುಗಿಸಲು ವಿಫಲವಾಗಿದ್ದಾನೆ. ಈ ಕುರಿತು ಆರೋಪಿ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Also Read  ನನಗೆ ಲಂಚ ಕೊಡಬೇಡಿ; ನಾನು ಭ್ರಷ್ಟ ಅಧಿಕಾರಿ ಆಗಲಾರೆ

 

 

error: Content is protected !!
Scroll to Top