ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌; ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮಾ.04. ಬೆಳ್ತಂಗಡಿಯಲ್ಲಿ ನೇತ್ರಾವತಿ, ಫಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳಲ್ಲಿ ನೀರು ಹರಿದ ಹಾಗೇ ರಾಜಕೀಯ ಬೆಳವಣಿಗೆಗಳು ನಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಥಾನ ಭದ್ರಗೊಳಿಸಬೇಕು ಎಂಬ ಹವಣಿಕೆಯಲ್ಲಿದೆ.


ಅಂತೆಯೇ ಕಾಂಗ್ರೆಸ್‌ ಕಳೆದು ಹೋದ ಸ್ಥಾನ ಮಾನವನ್ನು ಹೇಗೆ ದಕ್ಕಿಸಿಕೊಳ್ಳಬಹುದು ಎಂಬ ಚಿಂತನೆಯಲ್ಲಿದೆ. ಬಿಜೆಪಿ ಶಾಸಕರ ಹರೀಶ ಪೂಂಜ ಅಭ್ಯರ್ಥಿ ಎಂಬ ಭಾವನೆ ಎಲ್ಲೆಡೆ ಇದೆ. ಸುಮಾರು ೧,೮೦೦ ಕೋಟಿ ರೂ.ಗಳಷ್ಟು ಅನುದಾನದ ವಿವಿಧ ಕಾರ್ಯಕ್ರಮಗಳಿಗೆ ವಿನಿಯೋಗಿಸಿರುವುದು ಸ್ಥಾನ ಭದ್ರವಾಗಲು ಕಾರಣವಾಗಿದೆ.

Also Read  ಹರಿಯಾಣದಲ್ಲಿ ಭೀಕರ ಹಿಟ್ & ರನ್ ಕೇಸ್.! ➤ ಇಬ್ಬರು ಮಹಿಳೆಯರು ಮೃತ್ಯು

error: Content is protected !!
Scroll to Top