(ನ್ಯೂಸ್ ಕಡಬ)newskadaba.com ಬೀದರ್, ಫೆ.15. ವಿವಿಧ 6 ಮನೆಗಳ್ಳತನ ಪ್ರಕರಣಗಳಲ್ಲಿ ನಗರದ ಬಸವ ನಗರ, ಲಾಡಗೇರಿ, ಚಿಯಾನ್ ಕಾಲೋನಿ, ಬ್ಯಾಂಕ್ ಕಾಲೋನಿ, ಬ್ರಹ್ಮಪೂರ ಕಾಲೋನಿ ಮತ್ತು ಚನ್ನಬಸವ ನಗರಗಳಲ್ಲಿ ಕಳುವಾದ ಒಟ್ಟು 7 ಲಕ್ಷ 12000 ಮೊತ್ತದ 178 ಗ್ರಾಂ. ವಿವಿಧ ಆಭರಣಗಳು ಕಳುವು ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಗಾಂಧಿಗಂಜ್ ಪೋಲಿಸ್ ಠಾಣೆಯ ಪಿಎಸ್ಐ ಹಣಮರೆಡ್ಡೆಪ್ಪ ಅವರ ನೇತೃತ್ವದಲ್ಲಿ ರಚಿಸಲಾದ ರೌಡಿ ನಿಗ್ರಹ ದಳದ ತಂಡವು ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
